ಸೂರ್ಯಕಾಂತಾ ಪಾಟೀಲ್ (ಜನನ ೧೫ ಅಗಸ್ಟ್ ೧೯೪೮) ಭಾರತದ ೧೪ ನೇ ಲೋಕಸಭೆಯ ಸದಸ್ಯರಾಗಿದ್ದರು. ಅವರು ಮಹಾರಾಷ್ಟ್ರದ ಹಿಂಗೋಲಿ ಮತ್ತು ನಾಂದೇಡ್ ಕ್ಷೇತ್ರವನ್ನು ಪ್ರತಿನಿಧಿಸಿದರು ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್.ಸಿ.ಸಿ) ಸದಸ್ಯರಾಗಿದ್ದರು. ನಂತರ ೨೦೧೪ ರಲ್ಲಿ, ಪಕ್ಷಕ್ಕೆ ರಾಜೀನಾಮೆ ನೀಡಿದರು ಮತ್ತು ಡಾ. ಮಾಧವರಾವ್ ಕಿನ್ಹಾಲ್ಕರ್ ಅವರೊಂದಿಗೆ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ಅವರು ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾಗಿದ್ದರು. == ಜನನ == ಇವರು ವೈಫನಾದ, ನಾಂದೇಡ್, ಮಹಾರಾಷ್ಟ್ರದಲ್ಲಿ ಹುಟ್ಟಿದರು. ಇವರು ೨ ಜನವರಿ ೧೯೬೬ ರಂದು ವಿವಾಹವಾದರು. == ಪತ್ರಕರ್ತರಾಗಿ == ಅಧ್ಯಕ್ಷರು - ೧೯೮೦ ರಿಂದ ಜಿಲ್ಲಾ ಪತ್ರಕರ್ತರ ಸಂಘ (ಅಖಿಲ ಭಾರತೀಯ ಪತ್ರಕರ್ ಪರಿಷತ್ತಿನೊಂದಿಗೆ ಸಂಯೋಜಿತವಾಗಿದೆ). ಪತ್ರಕರ್ತ - ಸಂಪಾದಕರು ಸಾಕ್ಷರತೆ ಕಲಾತ್ಮಕ ಮತ್ತು ವೈಜ್ಞಾನಿಕ ಸಾಧನೆ. == ರಾಜಕೀಯ ವೃತ್ತಿಜೀವನ == ಕಾರ್ಪೊರೇಟರ್- ನಾಂದೇಡ್-ವಾಘಾಲಾ ಮುನ್ಸಿಪಲ್ ಕಾರ್ಪೊರೇಷನ್. ೧೯೭೧: ಅಧ್ಯಕ್ಷರು-ಜಿಲ್ಲಾ ಕಾಂಗ್ರೆಸ್ ಸಮಿತಿ (ಮಹಿಳಾ ವಿಭಾಗ), ನಾಂದೇಡ್. ೧೯೭೨-೭೪: ಪ್ರಧಾನ ಕಾರ್ಯದರ್ಶಿ-ಜಿಲ್ಲಾ ಯುವ ಕಾಂಗ್ರೆಸ್ ೧೯೭೭-೭೮: ಸಂಸ್ಥಾಪಕ- ಸದಸ್ಯ ಡಿ.ಸಿ.ಸಿ (ಭಾರತ) ನಾಂದೇಡ್. ೧೯೮೦: ಸದಸ್ಯ- ಮುನ್ಸಿಪಲ್ ಕೌನ್ಸಿಲ್ ನಾಂದೇಡ್. ೧೯೮೦-೮೫: ಸದಸ್ಯ- ಮಹಾರಾಷ್ಟ್ರ ವಿಧಾನಸಭೆ (ಹಡಗಾಂವ್) ೧೯೮೧-೮೨: ಅಧ್ಯಕ್ಷರು- ಅಧೀನ ಶಾಸನ ಸಮಿತಿ. ೧೯೮೧-೮೫: ಪ್ರಧಾನ ಕಾರ್ಯದರ್ಶಿ- ಪ್ರದೇಶ ಯುವ ಕಾಂಗ್ರೆಸ್ (ಐ), ಮಹಾರಾಷ್ಟ್ರ. ೧೯೯೧-೯೬: ಕಾರ್ಯಕಾರಿ ಸದಸ್ಯ-ಸಿಪಿಪಿ ಕಾಂಗ್ರೆಸ್ ಸಂಸದೀಯ ಪಕ್ಷ (ಐ) ೧೯೯೭-೯೮: ಉಪಾಧ್ಯಕ್ಷ- ಪ್ರದೇಶ ಕಾಂಗ್ರೆಸ್ ಸಮಿತಿ. === ಶಾಸಕಾಂಗದಲ್ಲಿ === ೧೯೮೬ - ೯೧: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮಹಾರಾಷ್ಟ್ರದಿಂದ ಸಂಸದ-(ರಾಜ್ಯಸಭೆ) ಆಯ್ಕೆ. ೧೯೮೮ - ೮೯: ಸದಸ್ಯ- ಸಲಹಾ ಸಮಿತಿ, ಪೆಟ್ರೋಲಿಯಂ ಮತ್ತು ರಾಸಾಯನಿಕಗಳ ಸಚಿವಾಲಯ. ೧೯೮೮ - ೯೦: ಸದಸ್ಯ, ನಿಯಮಗಳ ಸಮಿತಿ. ಹಿಂದಿ ಸಲಹಾಕಾರ್ ಸಮಿತಿ, ಉಕ್ಕು ,ಗಣಿ ಸಚಿವಾಲಯ ಮತ್ತು ಜಲಸಂಪನ್ಮೂಲ ಸಚಿವಾಲಯದ ಸದಸ್ಯ. ಸದಸ್ಯ- ಲೈಟ್ ಹೌಸ್ ಕೇಂದ್ರ ಸಲಹಾ ಸಮಿತಿ, ಮೇಲ್ಮೈ ಸಾರಿಗೆ ಸಚಿವಾಲಯ. ೧೯೯೧: ನಾಂದೇಡ್ ಲೋಕಸಭಾ ಕ್ಷೇತ್ರದಿಂದ ೧೦ನೇ ಲೋಕಸಭೆಗೆ ಆಯ್ಕೆ. ೧೯೮೮: ೧೨ನೇ ಲೋಕಸಭೆಯಲ್ಲಿ ಮರು ಆಯ್ಕೆ (೨ನೇ ಅವಧಿ) ೧೯೯೮ - ೯೯: ಸದಸ್ಯರ ರಕ್ಷಣಾ ಸಮಿತಿ ಮತ್ತು ಅದರ ಉಪ-ಸಮಿತಿ- ಸದಸ್ಯ ಮಹಿಳೆಯರ ಸಬಲೀಕರಣದ ಜಂಟಿ ಸಮಿತಿ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳ ಮೌಲ್ಯಮಾಪನದ ಉಪ ಸಮಿತಿ -ಅಪರಾಧ ಕಾನೂನುಗಳು. ೧೯೯೯ - ೨೦೦೪: ವೈಸ್ ಚೇರ್‌ಪರ್ಸನ್ - ಮಹಾರಾಷ್ಟ್ರ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ಎಜುಕೇಶನ್ ಅಂಡ್ ರಿಸರ್ಚ್ (ಎಮ್ ಸಿ ಎ ಇ ಆರ್), ಪುಣೆ ೨೦೦೪ - ೨೦೦೯ – ಎಂಪಿ ಮತ್ತು ಎನ್‌ಸಿಪಿ ಕೋಟಾದಿಂದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು. == ವಿಶೇಷ ಆಸಕ್ತಿ == ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುವುದು, ಕಾರ್ಮಿಕ ಚಳುವಳಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಬಡವರು ಮತ್ತು ದೀನದಲಿತರ ಉನ್ನತಿ. ನೆಚ್ಚಿನ ಕಾಲಕ್ಷೇಪ ಮನರಂಜನೆ: ಓದುವುದು, ಸಂಗೀತವನ್ನು ಆಲಿಸುವುದು ಮತ್ತು ಪ್ರಕೃತಿಯನ್ನು ಆನಂದಿಸುವುದು. ಕ್ರೀಡೆಗಳು ಮತ್ತು ಕ್ಲಬ್‌ಗಳು: ಈಜು, ಶೂಟಿಂಗ್ ಮತ್ತು ಟೇಬಲ್ ಟೆನ್ನಿಸ್. ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತ, ಟ್ರೇಡ್ ಯೂನಿಯನ್‌ವಾದಿ == ಭೇಟಿ ನೀಡಿದ ದೇಶಗಳು == ಜಪಾನ್, ಯುಎಸ್ಎ, ಚೀನಾ, ಈಜಿಪ್ಟ್, ಯುಕೆ, ಜರ್ಮನಿ, ನ್ಯೂಜಿಲೆಂಡ್, ಯುಎಇ, ಗ್ವಾಟೆಮಾಲಾ, ನಿಕರಾಗುವಾ. ಜನತಾ ಆಡಳಿತದಲ್ಲಿ ಮೂರು ಬಾರಿ ಜೈಲುವಾಸ ಅನುಭವಿಸಿದರು ಮತ್ತು ಷಾ ಆಯೋಗದ ಮುಂದೆ ಹಾಜರಾದರು. ಸದಸ್ಯ ಸಮಾಲೋಚನಾ ಸಮಿತಿ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧ್ಯಕ್ಷರು - ನಗರಸಭಾ ಶಿಕ್ಷಣ ಸಮಿತಿ, ನಾಂದೇಡ್. ಅಧ್ಯಕ್ಷೆ: ೧೯೭೭-೭೮ರಲ್ಲಿ ರಚನೆಯಾದಾಗಿನಿಂದ ಮಹಿಳಾ ಉದ್ಯೋಗ ವಿಕಾಸ್ ಸಂತೆ. ಸ್ಥಾಪಕ ಅಧ್ಯಕ್ಷರು: ವಿವಿಧೋದ್ದೇಶ ಕಾರ್ಮಿಕ ಸಂಘ, ನಾಂದೇಡ್ ಅಧ್ಯಕ್ಷರು: ಹುತಾತ್ಮ ಜಯವಂತರಾವ್ ಪಾಟೀಲ್ ಸಹಕಾರಿ ಸಕ್ಕರೆ ಕಾರ್ಖಾನೆ, ಸೂರ್ಯನಗರ ತಾ.ಪಂ. ಹಡಗಾಂವ್ ಜಿಲ್ಲೆ. ನಾಂದೇಡ್ ನಿರ್ದೇಶಕರು - ೧೯೮೮ ರಿಂದ ಜಿಲ್ಲಾ ನಾಂದೇಡ್ ಸಹಕಾರಿ ಗ್ರಾಹಕ ಒಕ್ಕೂಟ; ನಿರ್ದೇಶಕರು : ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್, ಮುಂಬೈ. == ಉಲ್ಲೇಖಗಳು ==